
ಸಸಿಗೋಳಿಯ ಉಗಮ
ಪರಶುರಾಮ ಸೃಷ್ಟಿಯ ಪವಿತ್ರ ನೆಲದಲ್ಲಿ, ವರಾಹಿ-ಸೀತಾ ನದಿಗಳ ನಡುವಿನ ಈ ಪ್ರದೇಶ ತಪೋಭೂಮಿಯಾಗಿ ಬೆಳಗಿತು. ಇಲ್ಲಿಯೇ ಒಂದು ಪವಿತ್ರ ಕ್ಷೇತ್ರವು ರೂಪುಗೊಳ್ಳಲಿತ್ತು.

ನಂದೀಶ್ವರಾಯ ವಿದ್ಯಮಹೇ ಶಿವಪ್ರಿಯಾಯ ಧೀಮಹಿ ತನ್ನೋ ನಂದಿಃ ಪ್ರಚೋದಯಾತ್ ॥
ಸಸಿಗೋಳಿ · ಕಕ್ಕುಂಜೆ · ಬ್ರಹ್ಮಾವರ
ಈ ಪವಿತ್ರ ಕ್ಷೇತ್ರದ ಜೀರ್ಣೋದ್ಧಾರಕ್ಕಾಗಿ ನವೀಕರಣ, ಪುನರ್ ನಿರ್ಮಾಣ ಮತ್ತು ಸಾಮೂಹಿಕ ಭಕ್ತಿಯ ಪಯಣ.
ಮಾಯಾಬಿಪುರ ರೂಪದಲ್ಲಿರುವ ಈ ಜಗತ್ತು ಒಂದು ಅದೃಶ್ಯ ಶಕ್ತಿಯಿಂದ ನಿಯಂತ್ರಿತವಾಗಿದ್ದು, ಪರಶುರಾಮ ಸೃಷ್ಟಿಯ ಈ ಪವಿತ್ರ ನೆಲೆಯು ಧಾರ್ಮಿಕ ಲೋಕಕ್ಕೆ ಕೇಂದ್ರ ಸ್ಥಾನವಾಗಿದೆ. ಇಲ್ಲಿ ನಡೆಯುವ ಆಚರಣೆಗಳು ಸಮಾಜದ ನೆಮ್ಮದಿ, ಶಾಂತಿ ಮತ್ತು ಸಮತೋಲನವನ್ನು ಕಾಪಾಡುತ್ತವೆ.
ಪ್ರತಿ ಗ್ರಾಮಕ್ಕೊಂದು ದೇವಾಲಯ, ಸೀಮೆಗೊಂದು ದೈವಸ್ಥಾನ ಎಂಬ ಪರಂಪರೆಯಿಂದ ಪೂರ್ವಜರು ಮನಸ್ಸಿಗೆ ಧೈರ್ಯ ಮತ್ತು ನೆಮ್ಮದಿಯನ್ನು ಕಂಡುಕೊಂಡರು. ಉತ್ತಮ ದೇವಸಾನ್ನಿಧ್ಯವಿರುವ ಊರು ಸಮೃದ್ಧಿಯಿಂದ ಬೆಳೆಯುತ್ತದೆ ಎಂಬ ನಂಬಿಕೆ ಇಂದಿಗೂ ಇದೆ.

ಪ್ರಾಚೀನ ಕಾಲದಲ್ಲಿ ಈ ಪ್ರದೇಶವು ದಟ್ಟ ಅರಣ್ಯದಿಂದ ಆವರಿಸಿಕೊಂಡಿತ್ತು. ಇಲ್ಲಿ ಆಲದ ಸಸಿಗಳು (ಗೋಳಿ) ಅಪಾರವಾಗಿ ಬೆಳೆಯುತ್ತಿದ್ದ ಕಾರಣ ಈ ಸ್ಥಳಕ್ಕೆ “ಸಸಿಗೋಳಿ” ಎಂಬ ಹೆಸರು ಬಂದಿತು.
ಗ್ರಾಮದ ಅಧಿದೈವ ಗಣಪತಿ ಮಹಾಲಿಂಗೇಶ್ವರನ ಅನುಗ್ರಹ ಹಾಗೂ ದೈವಾಜ್ಞೆಯಂತೆ ಹುತ್ತದ ರೂಪದಲ್ಲಿ ಪ್ರಾಕಟ್ಯಗೊಂಡ ಶ್ರೀ ನಂದಿಕೇಶ್ವರ ದೇವರು ಪರಿವಾರ ದೈವಗಳೊಂದಿಗೆ ಇಲ್ಲಿ ನೆಲೆಗೊಂಡು ಗ್ರಾಮದ ರಕ್ಷಕನಾಗಿ ಭಕ್ತರನ್ನು ಹರಸುತ್ತ ಬಂದಿದ್ದಾನೆ.
ಕಥೆಯನ್ನು ಮೂರು ಅಧ್ಯಾಯಗಳಲ್ಲಿ ತಿಳಿಯಿರಿ — ಸ್ವೈಪ್ ಅಥವಾ ಬಾಣಗಳ ಮೂಲಕ.

ಪರಶುರಾಮ ಸೃಷ್ಟಿಯ ಪವಿತ್ರ ನೆಲದಲ್ಲಿ, ವರಾಹಿ-ಸೀತಾ ನದಿಗಳ ನಡುವಿನ ಈ ಪ್ರದೇಶ ತಪೋಭೂಮಿಯಾಗಿ ಬೆಳಗಿತು. ಇಲ್ಲಿಯೇ ಒಂದು ಪವಿತ್ರ ಕ್ಷೇತ್ರವು ರೂಪುಗೊಳ್ಳಲಿತ್ತು.

ದೈವಾಜ್ಞೆಯಂತೆ, ಬೃಹತ್ ವಲ್ಮೀಕ — ಹುತ್ತ — ರೂಪದಲ್ಲಿ ಶ್ರೀ ನಂದಿಕೇಶ್ವರ ದೇವರು ಪ್ರಾಕಟ್ಯಗೊಂಡರು. ಆ ಹುತ್ತ ಇಂದಿಗೂ ಕ್ಷೇತ್ರದ ಮೂಲ ಸ್ಥಾನವಾಗಿ ಪೂಜೆಗೊಳ್ಳುತ್ತಿದೆ.

ಆಕಾಶ-ತುಲಾ-ಪಾತಾಳ ನಂದಿ, ಹೈಗುಳಿ, ರಕ್ತೇಶ್ವರಿ, ನಾಗ, ಬ್ರಹ್ಮ, ಬೊಬ್ಬರ್ಯ, ಹುಲಿದೇವರು, ಕ್ಷೇತ್ರಪಾಲ ಮುಂತಾದ ಹಲವಾರು ಪರಿವಾರ ದೈವಗಳು ಶ್ರೀ ನಂದಿಕೇಶ್ವರನ ಸುತ್ತ ನೆಲೆಗೊಂಡು ಕ್ಷೇತ್ರವನ್ನು ಪೂರ್ಣಗೊಳಿಸಿದರು.
ಬೃಹತ್ ವಲ್ಮೀಕದ ಮುಂಭಾಗದಲ್ಲಿ ವಿರಾಜಮಾನವಾಗಿರುವ ಮೂರು ನಂದಿ ವಿಗ್ರಹಗಳು ಕ್ಷೇತ್ರದ ದೈವಿಕ ಮಹಿಮೆಯನ್ನು ಸಾರುತ್ತವೆ; ಇಕ್ಕೆಲಗಳಲ್ಲಿ ಹಲವಾರು ಪರಿವಾರ ದೈವಗಳು ನೆಲೆಗೊಂಡಿವೆ.

ಚೆಂಡೆ ಮತ್ತು ಬಲಿಯೊಂದಿಗೆ ರಾತ್ರಿಯ ದೈವಿಕ ಆಚರಣೆ
ಅಗ್ನಿಯ ಮೇಲೆ ನಡೆಯುವ ಭಕ್ತಿಯ ಉಗ್ರ ಸೇವೆ
ಹಸಿನ ಹಾಲಿನಿಂದ ದೈವಗಳಿಗೆ ಅಭಿಷೇಕ
ಪ್ರತಿ ಮಾಸವೂ ನಡೆಯುವ ನಿಯಮಿತ ಪೂಜೆ
ವರ್ಷದ ಪ್ರಮುಖ ಧಾರ್ಮಿಕ ಸಮಾರಂಭಗಳು
ಢಕ್ಕೆಬಲಿ, ಗೆಂಡಸೇವೆ, ಹಾಲುಹಬ್ಬ, ಮಾಸಿಕ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳು ಇಂದಿಗೂ ಭಕ್ತಿಭಾವದಿಂದ ನೆರವೇರುತ್ತಿವೆ.
“ಅನೇಕ ಭಕ್ತರ ಕಷ್ಟಗಳನ್ನು ನಿವಾರಿಸಿ, ನ್ಯಾಯ, ನೆಮ್ಮದಿ ಹಾಗೂ ದೈವಾನುಗ್ರಹವನ್ನು ಕರುಣಿಸುವ ಕ್ಷೇತ್ರ.”
ತಪ್ಪು ಮಾಡಿದವರಿಗೆ ಶೀಘ್ರವೇ ಶಿಕ್ಷೆ ನೀಡುವ ಹಾಗೂ ದೀನರ ಕರೆಗೆ ಸ್ಪಂದಿಸಿ ಕರುಣೆ ತೋರುವ ದೈವವೆಂದು ಶ್ರೀ ನಂದಿಕೇಶ್ವರನನ್ನು ಭಕ್ತರು ಅಪಾರ ಭಕ್ತಿಯಿಂದ ಆರಾಧಿಸುತ್ತಾರೆ.




ಕಾಲಕ್ರಮೇಣ ದೇವಾಲಯದ ಸನ್ನಿಧಾನಗಳು ಮತ್ತು ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿರುವುದರಿಂದ, ಅಷ್ಟಮಂಗಲ ಪ್ರಶ್ನೆಯಲ್ಲಿ ಬಂದ ದೈವಾಜ್ಞೆಯಂತೆ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಮತ್ತು ಪುನರ್ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.
ಕ್ಷೇತ್ರದ ಪಾವಿತ್ರ್ಯ, ಪರಂಪರೆ ಹಾಗೂ ವೈಭವವನ್ನು ಮುಂದಿನ ಪೀಳಿಗೆಗಳಿಗೂ ಉಳಿಸಲು ಆರಂಭಿಸಿದ ಈ ಮಹತ್ಕಾರ್ಯಕ್ಕೆ ಒಂದು ಕೋಟಿಗೂ ಅಧಿಕ ವೆಚ್ಚ ಆಗುವ ನಿರೀಕ್ಷೆಯಿದೆ.
ವಿವರವಾದ ಮಾಹಿತಿ ಮತ್ತು ಚಿತ್ರಗಳನ್ನು ಶೀಘ್ರದಲ್ಲೇ ನವೀಕರಿಸಲಾಗುತ್ತದೆ.
ವಿವರವಾದ ಮಾಹಿತಿ ಮತ್ತು ಚಿತ್ರಗಳನ್ನು ಶೀಘ್ರದಲ್ಲೇ ನವೀಕರಿಸಲಾಗುತ್ತದೆ.
ವಿವರವಾದ ಮಾಹಿತಿ ಮತ್ತು ಚಿತ್ರಗಳನ್ನು ಶೀಘ್ರದಲ್ಲೇ ನವೀಕರಿಸಲಾಗುತ್ತದೆ.
ವಿವರವಾದ ಮಾಹಿತಿ ಮತ್ತು ಚಿತ್ರಗಳನ್ನು ಶೀಘ್ರದಲ್ಲೇ ನವೀಕರಿಸಲಾಗುತ್ತದೆ.
ವಿವರವಾದ ಮಾಹಿತಿ ಮತ್ತು ಚಿತ್ರಗಳನ್ನು ಶೀಘ್ರದಲ್ಲೇ ನವೀಕರಿಸಲಾಗುತ್ತದೆ.
ವಿವರವಾದ ಮಾಹಿತಿ ಮತ್ತು ಚಿತ್ರಗಳನ್ನು ಶೀಘ್ರದಲ್ಲೇ ನವೀಕರಿಸಲಾಗುತ್ತದೆ.
ಒಂದು ದೈವಸ್ಥಾನದ ಜೀರ್ಣೋದ್ಧಾರ ಮಾಡುವುದರಿಂದ ನೂರು ದೈವಸ್ಥಾನಗಳನ್ನು ಕಟ್ಟಿಸಿದ ಪುಣ್ಯ ಲಭಿಸುತ್ತದೆ ಎಂಬ ಪ್ರತೀತಿ ಇದೆ. ದೈವಸ್ಥಾನದ ಜೀರ್ಣೋದ್ಧಾರ ಅಥವಾ ಪುನಶ್ಚೇತನ ಕಾರ್ಯವು ಕೇವಲ ಕಟ್ಟಡದ ದುರಸ್ತಿಯಲ್ಲ; ಅದು ನಮ್ಮ ಸಂಸ್ಕೃತಿ, ನಂಬಿಕೆ, ದೈವ ಆರಾಧನೆ ಮತ್ತು ಪೂರ್ವಜರ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಪವಿತ್ರ ಕಾರ್ಯವಾಗಿದೆ. ಶ್ರೀ ನಂದಿಕೇಶ್ವರ ಸಪರಿವಾರ ದೈವಸ್ಥಾನದ ಈ ಪುಣ್ಯ ಜೀರ್ಣೋದ್ಧಾರ ಕಾರ್ಯದಲ್ಲಿ ಭಕ್ತರು ಮತ್ತು ಹಿತೈಷಿಗಳು ವಿವಿಧ ರೀತಿಯಲ್ಲಿ ಕೈಜೋಡಿಸಬಹುದು.
ಗರ್ಭಗುಡಿ ನಿರ್ಮಾಣ, ಶಿಖರ ಸ್ಥಾಪನೆ, ದೈವದ ಮುಖಗಂಡಡ / ಮೊಗ ತಯಾರಿ ಮತ್ತು ಇತರೆ ಜೀರ್ಣೋದ್ಧಾರ ಕಾರ್ಯಗಳಿಗೆ ನೇರವಾಗಿ ದೇಣಿಗೆ ನೀಡಬಹುದು.
→ ಭಾಗವಹಿಸಿನಿರ್ಮಾಣಕ್ಕೆ ಬೇಕಾಗುವ ಸಿಮೆಂಟ್, ಮರಳು, ಇಟ್ಟಿಗೆ, ಕಲ್ಲು, ಮರಮುಟ್ಟುಗಳು ಮತ್ತು ಇತರೆ ಅಗತ್ಯ ವಸ್ತುಗಳನ್ನು ಸೇವಾ ರೂಪದಲ್ಲಿ ನೀಡಬಹುದು.
→ ಭಾಗವಹಿಸಿಜೀರ್ಣೋದ್ಧಾರ ಕಾರ್ಯಗಳು ನಡೆಯುವ ಸಂದರ್ಭದಲ್ಲಿ ಸ್ವಯಂಪ್ರೇರಿತರಾಗಿ ಸ್ಥಳಕ್ಕೆ ಬಂದು ದೈಹಿಕ ಸೇವೆ ಸಲ್ಲಿಸಬಹುದು.
→ ಭಾಗವಹಿಸಿದೈವಸ್ಥಾನದ ಇತಿಹಾಸ, ಜೀರ್ಣೋದ್ಧಾರದ ಅಗತ್ಯತೆ ಮತ್ತು ದೇಣಿಗೆ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡು, ಇತರ ಭಕ್ತರಿಂದ ಸಹಕಾರ ಸಂಗ್ರಹಿಸಲು ಸಮಿತಿಯೊಂದಿಗೆ ಕೈಜೋಡಿಸಬಹುದು.
→ ಭಾಗವಹಿಸಿಶ್ರೀ ನಂದಿಕೇಶ್ವರ ಸಪರಿವಾರ ದೈವಸ್ಥಾನದ ಜೀರ್ಣೋದ್ಧಾರ ಮಹಾಕಾರ್ಯಕ್ಕೆ ಭಕ್ತರು ನೀಡುವ ದೇಣಿಗೆಯ ಮೊತ್ತದ ಆಧಾರದ ಮೇಲೆ, ಸಮಿತಿಯ ವತಿಯಿಂದ ಕೆಳಗಿನಂತೆ ಗೌರವಪೂರ್ವಕವಾಗಿ ಹೆಸರಿಸಲಾಗುತ್ತದೆ.

ಶ್ರೀ ನಂದಿಕೇಶ್ವರ ಹಾಗೂ ಸಪರಿವಾರ ದೈವಗಳ ಅನುಗ್ರಹವು ತಮ್ಮ ಹಾಗೂ ತಮ್ಮ ಕುಟುಂಬದವರ ಮೇಲೆ ಸದಾ ಇರಲಿ; ಸುಖ, ಶಾಂತಿ, ಆರೋಗ್ಯ, ಐಶ್ವರ್ಯ ಹಾಗೂ ಸರ್ವಾಭೀಷ್ಟಗಳು ಈಡೇರಲಿ.
ಸಸಿಗೋಳಿ, ಹಳಾಡಿ, ಕಕ್ಕುಂಜೆ, ಆಸೋಡು ಬಿ.ಒ.
ಬ್ರಹ್ಮಾವರ ತಾಲೂಕು, ಕೋಟೇಶ್ವರ, ಉಡುಪಿ ಜಿಲ್ಲೆ, ಕರ್ನಾಟಕ · 576 222
ॐ · ಧನ್ಯವಾದಗಳು · Hari Om · ಶ್ರೀ ನಂದಿಕೇಶ್ವರ ಪ್ರಸನ್ನ · ॐ