ಗತಕಾಲ ಸುಮಾರು ೬೦೦ ವರ್ಷಗಳ ಪೂರ್ವದಲ್ಲಿ, ಕಲ್ಲಿನ ಮಧ್ಯೆ ಎದುರು ಬೃಹತ್ತಾದ ಹುತ್ತವೊಂದು ಮೂಡಿ ಬಂದು, ಕಕ್ಕುಂಜೆ ಮಹಾಲಿಂಗೇಶ್ವರನ ಅಣತಿಯಂತೆ ನಂದೀಶ್ವರನು ಇಲ್ಲಿ ಕಾಣಿಸಿಕೊಂಡು ಪರಿಹಾರವನ್ನು ಕಂಡುಕೊಂಡಿದ್ದು, ಗ್ರಾಮವಾಸಿಗಳಿಗೆ ಗೋಚರವಾಗಿ ಇಲ್ಲಿ ಆಡಳಿತ ನಡೆಸುತ್ತಿದ್ದ ಜೈನ ಮನೆತನದವರು ಸ್ಥಾಪಿಸಿ ಆರಾಧಿಸಿದ ಲಕ್ಷಣ ತಿಳಿಯುತ್ತದೆ.
ಇದರಲ್ಲಿ ೧ ನಾಗ, ೩ ನಂದಿ — ಆಕಾಶ ನಂದಿ, ತುಲಾ ನಂದಿ, ಪಾತಾಳ ನಂದಿ ಎಂದು ಹಾಗೂ ರಕ್ತೇಶ್ವರಿ ಎಡಭಾಗದಲ್ಲಿ, ಗೆಂಡದ ಹೈಗುಳಿ, ಮೂಕ ಹೈಗುಳಿಯನ್ನು ಸ್ಥಾಪಿಸಿ, ಸ್ವಲ್ಪ ಅನತಿ ದೂರದಲ್ಲಿ ಬ್ರಹ್ಮ, ಬೊಬ್ಬರ್ಯ, ಕ್ಷೇತ್ರಪಾಲ, ಕಲ್ಲುಕುಟಿಗ, ಹುಲಿಚೌಂಡಿ, ನೇತ್ರ ಹೈಗುಳಿ ಸ್ಥಾಪನೆಯಾಗಿದೆ.
ನಂತರ ಆರಾಧನೆ ಮನುಷ್ಯನಿಂದ ಬೇರೆ ಬೇರೆ ಸ್ಥಳಗಳಲ್ಲಿ ಆದ ದೋಷ ನಿಮಿತ್ತ, ಬಳುಮನೆ ಹೈಗುಳಿ, ಕಾಸನಾಡಿ ಹೈಗುಳಿ, ಕೊಳ್ಕೆಬೈಲ್ ಹೈಗುಳಿ, ನರಾಡಿ ಹೈಗುಳಿ ಸ್ಥಾಪನೆ ಆಗಿದ್ದು, ಸ್ವಲ್ಪ ದೂರದಲ್ಲಿ ಒಂದು ಕೀಳು ಸ್ಥಾಪಿಸಿದ ಲಕ್ಷಣ ಕಂಡುಬರುತ್ತದೆ.
ಕಾಲಕ್ರಮದಲ್ಲಿ ಜೈನ ಮನೆತನದವರು ಕೆಂಡ ಸೇವೆ, ಡಕ್ಕೆಬಲಿ, ಮಾರಿ ಉತ್ಸವ ನಡೆಸಿ, ಜೈನ ಮನೆತನದವರು ಬಂಟ ಕುಟುಂಬಕ್ಕೆ ಇದನ್ನು ಬಿಟ್ಟು ಕೊಟ್ಟಿರುವರು.
ಜೈನ ಮನೆತನದಲ್ಲಿ ಗಂಡು ಸಂತತಿ ಇಲ್ಲದ ಕಾರಣ, ಅಳಿಯ ಕಟ್ಟಿನ ಆಚರಣೆ ಆದ್ದರಿಂದ, ಈ ದೈವ ಸ್ಥಳದ ಪಶ್ಚಿಮಾಶ್ರಮ ದಿಕ್ಕಿನಲ್ಲಿ ಮಕ್ಕಿ ಮನೆ ಎಂಬ ಜಾಗದಲ್ಲಿ ಬಂಟ ಸಮೂಹ ಬಂದು ಇಲ್ಲಿನ ಆಡಳಿತ ವ್ಯವಸ್ಥೆಯನ್ನು ಹಿಡಿದು ನಡೆಸಿದಂತೆ ಕಂಡುಬರುತ್ತದೆ.
ಕಾಲಕ್ರಮದಲ್ಲಿ ಈ ಕುಟುಂಬದಲ್ಲಿಯೂ ಹೆಣ್ಣು ಸಂತತಿ ಇಲ್ಲದೆ, ಇಲ್ಲಿ ಪೂರ್ವಾಶ್ರಯ ದಿಕ್ಕಿನ ಮೂರ್ವಿ ಎಂಬಲ್ಲಿನ ಬಂಟ ಸಮುದಾಯದಿಂದ ಮಂಜಮ್ಮ ಎಂಬ ಸ್ತ್ರೀಯನ್ನು ದತ್ತು ಸ್ವೀಕಾರ ಮಾಡಿಕೊಂಡು ಇಲ್ಲಿಯ ಸಂತಾನ ಬೆಳೆಸಿಕೊಂಡು, ಅಲ್ಲಿಯ ೪ ವಿಭಾಗದ ಮನೆಗಳಾದ:
- ಲಕ್ಷಣ
- ಮಕ್ಕಿಮನೆ
- ಹೊಸಮನೆ
- ನಾಲ್ತೂರು ಮನೆ
ಇನ್ನೊಂದು ಬಂಟ ಸಮುದಾಯದ ಮನೆತನ ಮೇಲೆ ಹೋದ ಲಕ್ಷಣ, ನಂತರ ಅನೇಕ ವಿಭಾಗ ಆದ ಲಕ್ಷಣವಿದೆ.
















